Friday, 8 December 2017

ಒಲವೇ ಬದುಕಿನ ಚಿತ್ತಾರ .

ಸಮಾಜದ ಗಂಡ - ಹೆಂಡತಿಯರೆಲ್ಲರೂ ಪರಸ್ಪರ ತೃಪ್ತಿದಾಯಕ ಬದುಕು ಸಾಗಿಸುತ್ತಿದ್ದಾರೆಯೇ? ಮದುವೆಯೊಂದಿಗೆ ಕಟ್ಟಿಕೊಂಡಿದ್ದ ಅವರ ಕನಸುಗಳು ನನಸಾಗಿವೆಯೇ? ಅಥವಾ ಯವ್ವನದ ಕನಸುಗಳನ್ನ ಪಕ್ಕಕ್ಕಿಟ್ಟು ಮದುವೆಯ ಬಳಿಕ ಹೊಸ ಪ್ರಾಯೋಗಿಕ ಕನಸುಗಳು ಅನಿವಾರ್ಯವಾಗಿ ಹುಟ್ಟಿಕೊಂಡವೇ? ಗಂಡ - ಹೆಂಡತಿಯರಿಂದ ನಿರೀಕ್ಷಿತ ಪ್ರೀತಿ ಪರಸ್ಪರ ಸಿಗುತ್ತಿವೆಯೇ? ಪ್ರೀತಿಸಿ ಮದುವೆಯಾಗಿರುವವರು ಹೆಚ್ಚು ಸುಖ ಅನುಭವಿಸುತ್ತಿದ್ದಾರೆಯೇ?... ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ‘ಇಲ್ಲ' ಎಂಬುದು ನನ್ನ ಅಭಿಮತ. ಆದರೂ ಸಮಾಜದ ಬಹುತೇಕ ಗಂಡ - ಹೆಂಡತಿಯರು ತಮ್ಮ ಮಕ್ಕಳೊಂದಿಗೆ ನೆಮ್ಮದಿಯಾಗಿದ್ದಾರೆ ಅಥವಾ ನಾವು ಖುಷಿಯಾಗಿದ್ದೇವೆ ಎನ್ನುತ್ತಿದ್ದಾರೆ ಯಾಕೆ? 
ಮದುವೆ ಎಂಬುದು ನಮ್ಮ ಸಮಾಜದಲ್ಲಿ ಪವಿತ್ರ ಬಂಧ. ಇದನ್ನ ಅಪವಿತ್ರಗೊಳಿಸಲು ಯಾರೂ ತಯಾರಿಲ್ಲ. ಯಾಕೆಂದರೆ ನಾವ್ಯಾರೂ ಮಿಸ್ಟರ್ ಪರ್ಫೆಕ್ಟ್ ಗಳಲ್ಲ ತಾನೇ. ಸಿಟ್ಟು, ವೈಮನಸ್ಸು, ನೋವು, ಜಗಳ, ಕೋಪ, ಹತಾಶೆ, ನಿರಾಶೆ...ಎಲ್ಲದರ ಹೊರತಾಗಿಯೂ ಪರಸ್ಪರ ಹೊಂದಾಣಿಕೆಯ ಬದುಕು ಮುಂದೆ ಸಾಗುತ್ತಿರುವುದು ಇದೇ ಕಾರಣಕ್ಕೆ. ಕೆಲವರು ತಮ್ಮ ನೋವನ್ನ ಆತ್ಮೀಯರಲ್ಲಿ ಹಂಚಿಕೊಂಡರೂ, ಬಹುತೇಕ ಗಂಡ - ಹೆಂಡತಿಯರು ತಮ್ಮೊಳಗೆ ಕೊರಗುತ್ತಾ ಬದುಕು ಸವೆಸುತ್ತಿರುತ್ತಾರೆ. ನಾನು ಮತ್ತು ನನ್ನ ಹೆಂಡತಿ ಕೂಡಾ ಇದರಿಂದ ಹೊರತಲ್ಲ. ಅದೇನೋ ಕನಸುಗಳನ್ನ ಹೊತ್ತು ಬಂದ ನನ್ನಾಕೆಗೆ ಸಿಕ್ಕಿದ್ದು ನನ್ನಂತಹ ಸಿಡುಕಿನ  ಗಂಡ. ಹೆಂಡತಿಯಾದವಳಲ್ಲಿ ಏನೇನೋ ಗುಣಗಳಿರಬೇಕೆಂದು ನಾನು ಬಯಸಿದ್ದರೂ ಅವುಗಳಲ್ಲಿ ಕೆಲವು ಆಕೆಯಲ್ಲಿಲ್ಲ. ಆದರೂ ಒಂದಾಗಿ ಬದುಕಿದ್ದೇವೆ. 
ಇದನ್ನ ಯಾಕಿಲ್ಲಿ ಪ್ರಸ್ತಾಪಿಸುತ್ತಿದ್ದೇನೆಂದರೆ  ನಮ್ಮ ದಾಂಪತ್ಯ ಜೀವನಕ್ಕೆ 22  ವರ್ಷಗಳು  ತುಂಬುತ್ತಿದೆ. ನಮ್ಮ ಬದುಕಿನುದ್ದಕ್ಕೂ ಅನೇಕ ಏರು-ಪೇರುಗಳನ್ನು ಕಂಡಿದ್ದೇವೆ. ಮಾನವ ಸಹಜ ಎಲ್ಲ ಕೊರತೆಗಳೂ ನಮ್ಮಿಬ್ಬರಲ್ಲಿವೆ. ಇವೆಲ್ಲದರ ಜೊತೆಗೆ ಚಿನ್ನದಂತಹಾ ಎರಡು  ಮಕ್ಕಳನ್ನ ಬೆಳೆಸಿದ್ದೇವೆ. ಅನೇಕ ಮಿತ್ರರು ನಿನ್ನ ಬದುಕಿನ ಸಾಧನೆಯೇನು? ಎಂದು ಕೆಣಕುವುದಿದೆ. ಅವರೆಲ್ಲರಿಗೆ ನಾನು ಕೊಡುವ ಉತ್ತರ ‘ನನ್ನ ಮಕ್ಕಳು’ ಎಂದು.  ಓದುತ್ತಿರುವ  ಈ ಮಕ್ಕಳೇ ನಮ್ಮ ಹೆಮ್ಮೆ, ಭವಿಷ್ಯ ಕೂಡಾ.
. ಸುಳ್ಳು ಹೇಳಲು ಗೊತ್ತಿಲ್ಲದ ನನ್ನಾಕೆ  ಮುಗ್ದೆ. ಇತರರ ಕಷ್ಟಗಳಿಗೆ ಮರುಗುವ ಗುಣವಂತೆ. ಹಗೆತನ, ಮತ್ಸರ ಆಕೆಯ ಹತ್ತಿರವೂ ಸುಳಿದಾಡೋದಿಲ್ಲ. 22 ವರ್ಷ ನನ್ನಂತಹ ದುಡುಕು ಸಿಡುಕು  ಸ್ವಭಾವದ ಗಂಡನನ್ನ ಸಹಿಸಿರೋದು ಆಕೆಯ ತಾಳ್ಮೆಗೆ ಕೈಕನ್ನಡಿ. ನನ್ನ ಎಲ್ಲ ಸಾಮಾಜಿಕ ಚಟುವಟಿಕೆಗಳಿಗೆ ನನ್ನಾಕೆ ಮತ್ತು ನಮ್ಮ ಮಕ್ಕಳು ನೀಡಿರುವ ಸಹಕಾರ, ಪ್ರೋತ್ಸಾಹಗಳೇ ನನ್ನ ಈ  ಬರಹಗಳಿಗೆ ಪ್ರೇರಣೆ.
ಹುಟ್ಟು,  ಮದುವೆ...ಇತ್ಯಾದಿಗಳ ವಾರ್ಷಿಕ ಆಚರಣೆಗಳು ನಮ್ಮಲ್ಲಿಲ್ಲ. ಆದರೂ  ದಾಂಪತ್ಯ ಜೀವನದ ಬಗ್ಗೆ ಯಾಕೋ ನಾಲ್ಕಕ್ಷರ ಗೀಚಬೇಕೆನಿಸಿತು.
   ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಜಗತ್ತೇ ಮುಷ್ಠಿಯೊಳಗಿರುವಾಗ ನಮ್ಮ ಆಪ್ತ ಸಂಬಂಧಗಳು ಪರಸ್ಪರ ಗಟ್ಟಿಗೊಳ್ಳಬೇಕಾಗಿತ್ತು. ಆದರೆ ಹಾಗಾಗಿಲ್ಲ. ಜಗತ್ತಿನಲ್ಲಿ ಇಂದು ಭರವಿರುವುದು ಪ್ರೀತಿಗೆ. ಒಬ್ಬರನ್ನೊಬ್ಬರು ಎದುರುಗೊಂಡಾಗ ನಗುವುದಕ್ಕೂ ಸಾಧ್ಯವಿಲ್ಲದಷ್ಟರ ಮಟ್ಟಿಗೆ ಈ ಭರ ಬೆಳೆದಿದೆ.
ಗಂಡ - ಹೆಂಡತಿಯರೂ ಇದರಿಂದ ಹೊರತಾಗಿಲ್ಲ. ಪ್ರೀತಿ ಇದ್ದರೂ ಅದನ್ನು ವ್ಯಕ್ತಪಡಿಸುವಲ್ಲಿನ ವಿಫಲತೆ, ಪ್ರೀತಿ ಸಿಗುತ್ತಿದ್ದರೂ ಅದನ್ನು ಅನುಭವಿಸುವಲ್ಲಿನ ಕೊರತೆ ಸಮಾಜದ ಅನೇಕ ಗಂಡ - ಹೆಂಡತಿಯರನ್ನು ಕಾಡುತ್ತಿರುವ ಮೂಲ ಸಮಸ್ಯೆ. ಇಂದಿನ ತಾಂತ್ರಿಕ ಜೀವನದಲ್ಲಿ ಕೆಲವು ಕಡೆ ವಿದ್ಯಾಮಾನಗಳನ್ನು ನೋಡುವಾಗ ಕೆಲವು ಗಂಡ ಹೆOಡತಿಯ ನಡುವೆ ಇರಬೇಕಾಗಿದ್ದ ಓಲವು ಪ್ರೀತಿ ಸೆಳೆತ ಬಲಹೀನಗೊOಡು ಪರ ಸ್ತ್ರೀ, ಪರ ಪುರುಷರತ್ತ ಆಕರ್ಷಿತವಾಗುತ್ತಿರುವ ವಿದ್ಯಾಮಾನಗಳು ಹೆಚ್ಚಾಗುತ್ತಿದೆ.ಹೈ ಫೈ ಸೊಸೈಟಿಗOತು ಇದೊOದು ಹೊಸ ಟ್ರೇಂಡ್ ಆಗಿ ಮೇಳೈಸಿರುವುದು ಭಾರತೀಯ ಸಂಸ್ಕ್ರತಿಯ ದುರಂತವೇ ಸರಿ. ತಪ್ಪು ತಪ್ಪೇ . ಅದು ಪುರುಷ ಮಾಡಿದರೂ ತಪ್ಪು, ಸ್ತ್ರೀ ಮಾಡಿದರೂ ತಪ್ಪು. ಲೈಂಗಿಕತೆ ಎನ್ನುವಂತದ್ದು ಜೀವನದ ಒಂದು ಭಾಗವೇ ಹೊರತು, ಜೀವನವೇ ಲೈಂಗಿಕತೆ ಅಲ್ಲ. ಆದರೆ ಇತ್ತೀಚಿನ ನೌಕರಿ ರಂಗದಲ್ಲಿ ಕೆಲವು ಕಡೆ   ಮತ್ತು  ಹೈ ಸೊಸೈಟಿಗಳಲ್ಲಿ ಸಾಮನ್ಯವೆOಬOತೆ ಕಾಣಸಿಗುತ್ತಿರುವ ಅನೈತಿಕ ಸOಬOದಗಳು ಭಾರತೀಯ ಸಮಾಜದ ಸ್ವಾಸ್ಟ್ಯವನ್ನು ಕೆಡಿಸಿದೆ. ಭಾರತೀಯ ಚಿತ್ರರOಗದ ಪ್ರಾಭಾವವೂ ಇದಕ್ಕೆ ಮತ್ತೋಂದು ಕಾರಣ ಎನ್ನಬಹುದು. ಸಿನಿಮಾ ನಟಿಯರು ಮದುವೆ ಆಗಿ ಮಕ್ಕಳಿರುವ ಪುರುಷರನ್ನು ಒಲಿಸಿ ವಿಚ್ಛೇದನ ಕೊಡಿಸಿ ಮದುವೆ ಆಗುತ್ತಿರುವುದೂ ಒಂದು ರೀತಿಯಲ್ಲಿ ಅನೈತಿಕತೆಯನ್ನು ನೈತಿಕತೆಯತ್ತ ಕೊOಡೊಯ್ಯುವ ವಿಧಾನ ಅಂದರೆ ತಪ್ಪಲ್ಲ. ಇದರಲ್ಲೀ ನಾನು ಈ ಮೊದಲೇ ತಿಳಿಸಿದOತೆ ಪುರುಷರ ಪಾಲೂ ಇದೆ. ಮದುವೆ ಆಗಿ ಮಕ್ಕಳಿದ್ದ ಮೇಲೂ ಅನೈತಿಕ ಲೈOಗಿಕತೆಗಾಗಿ ತಮ್ಮ ಮಕ್ಕಳು, ಗಂಡ, ಹೆOಡತಿಯರನ್ನು ಬಿಟ್ಟೊಡುವವರನ್ನು  ಸಮಾಜ ಬಹಿಷ್ಕರಿಸಬೇಕು. ಗಂಡ ಹೆOಡತಿಯ ನಡುವೆ ಪ್ರೀತಿ ಪ್ರೇಮ ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿರಬೇಕು. ತಾಳ್ಮೆ, ಸಹನೆ, ಹೊOದಾಣಿಕೆ, ಕ್ಷಮೆ ಇವೇ ಯಶಸ್ವಿ ದಾOಪತ್ಯದ ಸರಳ ಸೂತ್ರಗಳು.ಹಾಗೆಯೇ ವೈವಾಹಿಕ ಚೌಕಟ್ಟಿನ ಒಳಗೇ ಲೈಂಗಿಕ ಸOಬOದಗಳು ನಡೆಯಬೇಕು.ಆದರೆ ಅದು ವೈ ವಾಹಿಕ ಚೌಕಟ್ಟನ್ನು ಮೀರಿದರೆ ಅದು ನೈತಿಕತೆಯ ಅಧಪತನಕ್ಕೆ ದಾರಿ.
  ಇತ್ತೀಚೆಗೆ ಹಳ್ಳಿಯಿಂದ ಹಿಡಿದು ನಗರದಲ್ಲಿರುವ ಸಂಘ ಸಂಸ್ಥೇಗಳು ಹಳದಿ ಕುಂಕುಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಇದು ನಿಜವಾಗಿಯೂಁ ಒಂದು ಸಕಾರಾತ್ಮಕ ಕಾರ್ಯಕ್ರಮ.ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುವಾಗ ತಮ್ಮ ಹೆಣ್ಣು ಮಕ್ಕಳನ್ನು ಜೊತೆಯಲ್ಲಿ ಕೊOಡೊಯ್ಯುಬೇಕು.ಅಲ್ಲಿನ ಆ ಕಾರ್ಯಕ್ರಮದ ಮೂಲ ಉದ್ದೇಶಗಳು ಮಕ್ಕಳಿಗೆ ಬಾಲ್ಯದಿOದ ಕಿಶೋರಾವಸ್ಠೇಗೆ ತಲುಪುವಾಗ ತನ್ನಿOತಾನೆ ಅರಿವು ಮೂಡಲು ಸಾಹಾಯಕವಾಗುತ್ತದೆ. ಇಂದು ದೇಶ ಪ್ರಗತಿ ಪಥದಲ್ಲಿದೆ. ಸ್ತ್ರೀ ಪುರುಷರಿಬ್ಬರು ಸಮಾನವಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆ ಯುತ್ತಿದ್ದಾರೆ ಆದರೆ ಎಲ್ಲಾ ಇದ್ದು ನೈತಿಕತೆಯೇ ಇಲ್ಲವಾದಲ್ಲಿ ಎಲ್ಲಾವೂ ವ್ಯರ್ಥ. ನಮ್ಮ ಕಲಿಕಾ ರೀತಿಯಲ್ಲೇ ಲೋಪವಿದೆ. ಹಣ ಗಳಿಸುವುದಕಸ್ಟೇ ಶಿಕ್ಷಣ ಸೀಮಿತವಾಗಿದೆ.ಹಿOದೆ ನಮ್ಮ ಬಾಲ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ನೀತಿಬೋಧೆ ಎನ್ನುವ ಪಾಠಕ್ಕೆ ಒಂದು ಪೀರೀಯಡ್ ಮೀಸಲೀರುತೀತ್ತು. ನ್ಯಾಯ, ನೀತಿ, ಧರ್ಮದ ಬಗ್ಗೆ ಅರಿವು ಮೂಡಿಸುತ್ತಿತ್ತು. ಪ್ರೇಮ ಕವಿ  ಕೆ.ಎಸ್ ಸರಸಿಂಹ ಸ್ವಾಮಿಯ ಕವನಗಳಲ್ಲಿ ಪತಿ ಪತ್ನಿಯ ನಡುವೆ ನವಿರಾದ ಪ್ರೇಮ ದಾOಪತ್ಯ ಸOಬOದಗಳ ಹಾಡುಗಳು ಜನ ಜೀವನದ ಮೇಲೆ ಪರಿಣಾಮ ಬೀರುತಿದ್ದವು.ಇದೆಲ್ಲ ಬಿಡಿ ಅಂದಿನ ಸದಭಿರುಚಿಯ ಮೌಲ್ಯಾಧಾರಿತ ಚಲನಚಿತ್ರಗಳು ನೀತಿ ಭೋಧಕವಾಗಿದ್ದವು.ಡಾ ರಾಜ್ ರ ಭಾಗ್ಯವOತರು ಚಿತ್ರದಲ್ಲಿ ಪತಿ ಪತ್ನಿ ಜೀವನದುದ್ದಕ್ಕು ಒಂದಾಗಿ ಕೊನೆಗೆ ಸಾವಿನಲ್ಲೂ ಜೊತೆಯಾಗಿದ್ದದ್ದು ಮಧುರ ದಾOಪ೉ತ್ಯ ಜೀವನಕ್ಕೆ ಮಾದರಿ ಎನಿಸಿತ್ತು ಆ ಕಾಲದಲ್ಲಿ. ಭದ್ರಗಿರಿ ಶ್ರೀ ಅಚ್ಚ್ಯುತ ದಾಸರ, ಶ್ರೀ ಕೇಶವ ದಾಸರ ಹ಼ರಿಕಥೆಗಳು ಅಂದು ಜನರ ಜೀವನದ ಹಾಸುಹೊಕ್ಕಾಗಿ ಸೇರಿ ಜನತೆ ಸನ್ಮಾರ್ಗ ಮುಖಿಯಾಗಿದ್ದರು.ಆದರೆ ಇಂದು ಶಿಕ್ಷಕಿಯೇ ವಿಧ್ಯಾರ್ಥಿಯ ಪ್ರೇಮಪಾಶದಲ್ಲಿ ಬಿದ್ದು ಓಡಿ ಹೋಗುವ ಪ್ರಸಂಗಗಳು, ತಾಯಿ ವಯಸ್ಸಿನ ಮಹಿಳೆ ಮಗನ ವಯಸ್ಸಿನವನ ಜೊತೆಗಿನ ಅನೈತಿಕ ಸOಬOದಗಳ ವಾರ್ತೆಗಳನ್ನು ಓದುವಾಗ ನೋಡುವಾಗ ಈ ನೀಚ ಲೈಂಗಿಕತೆ ಅಂದರೆ ಅನೈತಿಕ ಸOಬOದಗಳು ಮಾನವನ ಬದುಕಿನ ಮೇಲೆ  ಹೇಗೆ ಅಟ್ಟಹಾಸಗೈಯುತ್ತಿದೆ ಎOಬುದನ್ನು ತೋರಿಸುತ್ತದೆ.  ಇಸ್ಟೆಲ್ಲಾ ಸಾಲದು ಎOಬOತೆ ದೇಶದಲ್ಲಿನ ಲೀವ್ ಇನ್ ರಿಲೇಶನ್ ಶಿಪ್ ನ ಅಡಿ ಮದುವೆ ಆಗದೆ ಜೊತೆಯಾಗಿ ಬಾಳುವOತದ್ದು ಭಾರತೀಯ ಸಮಾಜದಲ್ಲಿ  ನಿಜವಾಗಿಯೂ ಅನೈತಿಕತೆಯೆOಬ ಉರಿಯುವ ಬೆOಕಿಗೆ ಇನ್ನೂ ಪೆಟ್ರೋಲ್ ಸುರಿದOತೆ ಅಂದರೆ ತಪ್ಪಲ್ಲ.ವಿದ್ಯೆ ಇದ್ದು ಸOಸ್ಕಾರವೇ ಇಲ್ಲವೆOದಲ್ಲಿ ಅದು ಅನಾಗರಿಕ ಸಮಾಜಕ್ಕೆ ದಾರಿ. ಬದುಕಿನಲ್ಲಿ ಕಾಮ, ಲೈಂಗಿಕತೇ ಅನ್ನುವಂತದ್ದು ಊಟದ ಬಾಳೆ ಎಲೆ ಯ ಮೇಲಿನ ಉಪ್ಪಿನಕಾಯಿ ಎನ್ನುವ ವ್ಯಂಜನದ ಸ್ಥಾನದಲ್ಲೇ ಇರಬೇಕು. ಸOಪೂರ್ಣ ಉಪ್ಪಿನಕಾಯಿಯೇ ಊಟದ ಸ್ಥಾನವನ್ನು ಅಲಂಕರಿಸುತ್ತದೆಯೆ? ಇಲ್ಲ ತಾನೆ.ಯಾವುದು ಯಾವ ಪ್ರಾಮಾಣದಲ್ಲಿರಬೇಕೇ ಅದೇ ಪ್ರಾಮಾಣದಲ್ಲಿದ್ದೇರೇನೇ ಅದಕ್ಕೊOದು ಚಂದ ಅಂದ. ಒಟ್ಟಾರೆಯಾಗಿ ಕಡವಾಚೌತ್ ವ್ರತ, ಭೀಮನ ಅಮಾವಾಸ್ಯೆಯ ಆಚರಣೆ, ಹೋಟಸಾವಿತ್ರಿ ವ್ರತಾಚರಣೆಗಳ ಭಾರತದ ಸಂಸ್ಕತಿಗೆ ಇಂತಹ ಹೆಚ್ಚುತ್ತಿರುವ ಅನೈತಿಕ ಸOಬOದ ಕಾOಡಗಳು ಕಪ್ಪು ಚುಕ್ಕೆ. ಎಲ್ಲಿಯೂ ಯಾವುದನ್ನು ನOಬುವOತಿಲ್ಲ. ಎಲ್ಲಿ ಧರ್ಮದ ಆಚಾರಣೆಗಳು ಹೆಚ್ಚಿವೆಯೋ ಅಲ್ಲಿ ಅಧರ್ಮ ಅನೀತಿಗಳು ಹುಟ್ಟುತ್ತವೆ ಎನ್ನುವುದಕ್ಕೇ ಅಶಾರಾಮ್ ಬಾಪೂಜಿ, ಬಿಡದಿ ನಿತ್ಯಾನಂದ ಸ್ವಾಮಿ ಪಂಜಾಬ್ ನ ರಾಮ್ ರಹೀಮ್  ಎನಿಸಿಕೊOಡವರು ಜ್ವಲಂತ ಉದಾಹರಣೆ. ವಿಜ್ಞಾನಿ ಡಾರ್ವಿನ್ ನವರ ಸಿದ್ದಾಂತದ ಪ್ರಕಾರ ಮನುಷ್ಯ ಮಂಗನಿOದ ಮಾನವನಾಗಿ ರೂಪಾಂತರಗೊOಡನಂತೆ.ಆದರೆ ಅದೇ ಈಗ ಉಲ್ಟಾ ಹೊಡೆದಂತೆ ಭಾಸವಾಗುತ್ತಿದೆ.ಏಕೇಂದರೆ ಈ ಅನೈತಿಕ ಲೈಂಗಿಕ ಸ್ವೇಚ್ಛಾಚಾರದ ಮೂಲಕ ಮನುಷ್ಯ ಪಶುವಿನಂತೇ ವರ್ತಿಸತೊಡಗಿದ್ದಾನೆ.
ನನ್ನ ಕೋರಿಕೆ ಇಷ್ಟೇ. ನಮ್ಮನ್ನೇ ನಂಬಿ ಬದುಕುವವರಿಗೆ, ಆತ್ಮೀಯರಿಗೆ, ಸಹಜೀವಿಗಳಿಗೆ ಒಂದಷ್ಟು ಪ್ರೀತಿ ಕೊಡೋಣ. ನಮ್ಮ ಶತ್ರುಗಳಿಗೂ ಒಂದಿಷ್ಟು ಪ್ರೀತಿ ಹಂಚೋಣ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರೇಮ  ಅಸ್ತ್ರವೇ ಹೊರತು ಕಾಮ ಅಲ್ಲ .
ಏನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

Friday, 1 December 2017

A donor of Kidneys is available.

A person aged 27 is in his death bed . His last wish is to donate his kidneys. His blood group is : *AB+ve*
Mob: *7339681726*
Plz Share ..
Someone somewhere may require.
Forward to as many as possible
We may save a life.

Wednesday, 22 November 2017

ಕೇಂದ್ರ ಸರಕಾರದ ತರಬೇತಿ ಯೋಜನೆ.

ದಿನಭತ್ಯೆಯೊಂದಿಗೆ ಕೇಂದ್ರ ಸರಕಾರದ ತರಬೇತಿ ಯೋಜನೆ, ಎಲ್ಲಾ ನಿರುದ್ಯೋಗಿ ಯುವಕ ಯುವತಿಯರು ಪ್ರಯೋಜನ‌ ಪಡೆಯಿರಿ, ತರಬೇತಿ ನಂತರ ಖಚಿತ ಉದ್ಯೋಗ ಅವಕಾಶವಿದೆ..

Sunday, 19 November 2017

ಉಡುಪಿ ದೇವಾಡಿಗ ಸಂಘ ಕದಮ್ ಮ ಎ ಸೌ ಎ (MASA).

ಕೆಲವು ಸಂಘಟನೆಗಳ ಸಾಮಾಜಿಕ ಬದ್ದತೆಯುಳ್ಳ ಕಾರ್ಯ ಚಟುವಟಿಕೆಗಳು ಇತರ ಸಂಘ ಸಂಸ್ಥೇಗಳಿಗೆ ಪ್ರೇರಣೆಯಾಗುತ್ತದೆ. ಉಡುಪಿ ದೇವಾಡಿಗ ಸಂಘ ಕಳೆದ ಎರಡು ವರ್ಷಗಳಿOದ ರಾಜ್ಯದ ಎಲ್ಲಾ ಪ್ರತಿಭಾ ದೇವಾಡಿಗ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಅವರ ಕಾರ್ಯವೈಖರಿಯನ್ನು ಸಾಕ್ಷೀಕರಿಸುತ್ತದೆ. ಇದರಲ್ಲೀ ಇವರಿಗೆ ಮುOಬೈ ಸಂಘದ ಸಹಕಾರವನ್ನು ಸ್ಮರಿಸಬೇಕಾಗುತ್ತದೆ. ಈಗ ಉಡುಪಿ ಸಂಘ ಅವರ ಕಾರ್ಯ ವ್ಯಾಪ್ತಿಗೆ ಬರುವ ವಿಕಲಾಂಗ ಸ್ವಜಾತಿ ಭಾಂಧವರಿಗೆ ಅಪಂಗ ವೇತನ ನೀಡುವ ಮೂಲಕ ದೇವಾಡಿಗ ಸಂಘಗಳ ಇತಿಹಾಸದಲ್ಲಿ ಒಂದು ಹೊಸ ಅದ್ಯಾಯವನ್ನು ಬರೆದಿದೆ..ಏನಾದರೂ ಒಂದು ಹೊಸದನ್ನು ಮಾಡಬೇಕು, ಸಾಧಿಸಬೇಕೆನ್ನುವ ಈ  ಸಂಘದ ಛಲ ನಿಜಕ್ಕೂ ಶ್ಲಾಘನೀಯ.ಉಡುಪಿ ಜಿಲ್ಲೆಯಲ್ಲಿ  ಸ್ವಜಾತಿ ಭಾಂಧವರ ಮನೆಗಳು ಪ್ರಕ್ರತಿ ವಿಕೋಪಕ್ಕೆ ಒಳಗಾದಾಗ ಅಲ್ಲಿಯೂಁ ಧಾವಿಸಿ ಆಳಿಲು ಸೇವೆ ಮಾಡುವುದನ್ನು ನೋಡುವಾಗ ಹೆಮ್ಮೆಯೆನಿಸುತ್ತದೆ.
    ಇನ್ನು ಕದಮ್, ಈ ದೇವಾಡಿಗ ಮಿತ್ರರನ್ನು ನೋಡುವಾಗ ಇವರು ದೇವಾಡಿಗ ಮಿತ್ರರು ಅನ್ನುವುದಕ್ಕಿOತ ದೇವಾಡಿಗ ಆಪತ್ ಭಾಂದವರು ಎನ್ನುವುದು ಹೆಚ್ಚು ಸೂಕ್ತವೆನಿಸಬಹುದು. ಜೀವನ ನಿರ್ವಹಣೆಗಾಗಿ ಹೊರ ದೇಶ ಸೇರಿ ತನ್ನ ಕುಟುOಬಕ್ಕೆ ಸೀಮಿತವಾಗಿರದೆ ಇಡೀ ದೇವಾಡಿಗ ಸಾಮಾಜಕ್ಕೆ ವೈದ್ಯಕೀಯ ಸಹಾಯ ಹಸ್ತ ನೀಡುವ ಇವರ ಕಾರ್ಯ ಅಭಿನಂದನೀಯ.
  Masa ಅನ್ನುವ ದೇವಾಡಿಗೇತರ ಸೌದಿ ಅರೇಬಿಯಾದ ಚಾರಿಟಿ ಸಂಸ್ಥೇ  ದೇವಾಡಿಗರಿಗೆ ನಿರಂತರ ಸಹಾಯ ಹಸ್ತ ನೀಡುತ್ತಾ ಬಂದಿದೆ. ಸೌದಿ ಅರೇಬಿಯಾ ಸೇರಿ  ಬಂದ ಆದಾಯದ ಮೂಲಕ ಊರಿನಲ್ಲಿ ಪ್ರೊಪರ್ಟಿ ಮೇಲೆ ಪ್ರೊಪರ್ಟಿಗಳನ್ನು ಮಾಡಬಹುದಿತ್ತು .ಆದರೆ ಇದಕ್ಕೆಲ್ಲ ಗಮನ ಕೊಡದ ಮಾಸ ಸದಸ್ಯರು  ಕಳೆದ ಹತ್ತು ವರ್ಷಗಳಲ್ಲಿ  ಒಂದು ಕೋಟಿಗೂ ಮೀರಿ ಅವಿಭಜಿತ ದಕ್ಷಿಣ ಕನ್ನಡ ತುಳು ಕನ್ನಡ ಜನತೆಗೆ ಜಾತಿ ಮತಭೇದವಿಲ್ಲದೆ  ವೈದ್ಯಕೀಯ ನೆರವು ಮತ್ತು ಶೈಕ್ಷಣಿಕ ಸಹಾಯ ನೀಡಿದೆ. ಇಂತಹ ಹೊರ ನಾಡ ಚಾರಿಟಿ ಸಂಸ್ಥೇಗಳನ್ನು ಕರ್ಣಾಟಕ ಸರಕಾರ ಗೌರವಿಬೇಕು. ಕದಮ್, ಮಾಸಾ ದ ವೈದ್ಯಕೀಯ ನೆರವಿನ ಬಗೆಗಿನ ತತ್ಪರತೆ ಹಾಗು ಉಡುಪಿ ಸಂಘದ ವಿಕಲಾಂಗ ವೇತನದ ಮಹತ್ತರ ನಿರ್ಣಯಗಳಿಗೆ ನಾನು ತಲೆ ತಗ್ಗಿಸಿ ನಮಿಸುವೆ.
ಆಟ, ಊಟ, ಆಟಿದ ಕೂಟ,ಪಿಕ್ನಿಕ್, ವಾರ್ಶಿಕೋತ್ಸವಗಳ ಭರಾಟೆಗಳ ದರ್ಭಾರಿನಲ್ಲಿ ಸಂಘ ಸಂಸ್ಥೇಗಳ ಹುಟ್ಟುವಿಕೆಯ ಮೂಲ ಉದ್ದೇಶಗಳೇ ಅದ್ರಶ್ಯವಾಗುತ್ತಿದೆಯೋ ಎOದೆಣಿಸುವಾಗ ಮೇಲೆ ಹೇಳಿದ ಚಾರಿಟಿ ಸಂಸ್ಥೇಗಳ ಕಾರ್ಯ ವೈಖರಿಯು ಮನಸ್ಸಿಗೆ  ಮುದ ನೀಡುತ್ತದೆ. ದೇಶದ ಎಲ್ಲ ಸಂಘಟನೆಗಳು ಇವರು ಮೂಡಿಸಿದ ಹೆಜ್ಜೆ ಗುರುತುಗಳ ಪಥದತ್ತ ಸಾಗುವಂತಾಗಲಿ ಎOದು ಆಶಾವಾದ ವ್ಯಕ್ತ ಪಡಿಸುತ್ತಾ ..........ಒಹ್ ನನ್ನ ತಂಗುದಾಣ ಸಮೀಪಿದೆ, ಇಳಿಯತ್ತಿದ್ದೇನೆ.
ಮತ್ತೆ ಭೇಟಿಯಾಗೋಣವೇ.

Thursday, 16 November 2017

ಕುಂದಾಪುರ ಕದಂ ದುಬೈ ಸದಸ್ಯರ ವತಿಯಿಂದ ಧನ  ಸಹಾಯ.

ದಿನೇಶ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ ಮಿತ್ರ ಕುಂದಾಪುರ ಕದಂ ದುಬೈ ಸದಸ್ಯರ ವತಿಯಿಂದ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೇರಂಜಾಲಿನ ಸತೀಶ್ ದೇವಾಡಿಗ ಮತ್ತು ಗಂಗೊಳ್ಳಿಯ ಗಣೇಶ್ ದೇವಾಡಿಗ ಇವರಿಗೆ ತಲಾ 10000 ದಂತೆ 20000 ಧನ  ಸಹಾಯವನ್ನು ಪಲಾನೂಭವಿಗಳಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ತ್ರಾಸಿ ರಾಜು ದೇವಾಡಿಗ, ಶೀನ ದೇವಾಡಿಗ ಮರವಂತೆ, ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹನಾಧಿಕಾರಿಯಾದ ರವಿ ದೇವಾಡಿಗ ತಲ್ಲೂರು, ಮಹಾಬಲ ದೇವಾಡಿಗ ಗಂಗೊಳ್ಳಿ ಮೊದಲಾದವರು ಉಪಸ್ತಿತರಿದ್ದರು.

Wednesday, 8 November 2017

Congratulations Mukesh Devadiga.

Mr Mukesh devadiga Mangalore won Gold Medal in Karnataka state Junior  Powerlifting ChampionShip held at Kinnigoli on 05/11/2017.

Tuesday, 7 November 2017

ಬಿ ಜೆ ಪಿ ಗೆ ಕರ್ನಾಟಕದ ಚುನಾವಣೆ ಕಬ್ಬಿಣದ ಕಡಲೆಯಾಗಬಹುದೇ ?

ಕರ್ಣಾಟಕದ ಮುOಬರುವ ವಿಧಾನಸಭಾ ಚುನಾವಣೆಯOತೂ ತ್ರಿಕೋನ  ಸರಣಿಯಾಗಿ ಮಾರ್ಪಟ್ಟು ಇಡೀ ದೇಶದ ಗಮನ ಸೆಳೆಯುತ್ತಿದೆ. ಶತಾಯ ಗತಾಯ ಅಧಿಕಾರ ಹಿಡಿದೆ ತೀರಬೇಕೆOಬ ಉದ್ದೇಶದಿOದ  ಬಿ ಜೆ ಪಿ ಪರಿವರ್ತನಾ ಯಾತ್ರೆ  ಆರಂಭಿಸಿದೆ. ಆದರೆ ದೌರ್ಭಾಗ್ಯವೆOದರೆ ಬಿ ಜೆ  ಪಿ ಯ ಓಳ ಜಗಳ ನಿಲ್ಲುವ ಸೂಚನೆ ಕಾಣದೆ ಅದು ಮಾರಕವಾಗುವ ಸೂಚನೆ ಕಾಣುತ್ತಿದೆ. ಪರಿವರ್ತನಾ ಯಾತ್ರೆ ಯ ಉದ್ಘಾಟನ ಸಭೆಗೆ ನಿರೀಕ್ಷಿತ ಮಟ್ಟಿನ ಕಾರ್ಯಕರ್ತರು ಹಾಜರಾಗದೆ ಶ್ರೀಮಾನ್ ಯಡಿಯೂರಪ್ಪ ಮುಖಭಂಗ ಅನುಭವಿಸಿದ್ದಾರೆ.ಇದೆಲ್ಲಕ್ಕೊ ಮಾಜಿ ಮುಖ್ಯಮಂತ್ರಿ ಆರ್ ಅಶೋಕ್ ಕಾರಣವೆOದು ಬಿಜೆಪಿ ರಾಸ್ಟ್ರಾಧ್ಯಕ್ಸ್ಜರಿಗೆ ದೂರು ಕೂಡ ಹೋಗಿದೆ ಎOಬ  ಸುದ್ಧಿ ಇದೆ. ಅಲ್ಲಿಂದ ಮುOದೆ ಶ್ರೀಮಾನ್ ಎಸ್ ಈಶ್ವರಪ್ಪನವರು ತುಮಕೂರ್ ನಲ್ಲಿ ಏನೋ ಹೇಳಲು ಹೋಗಿ ಸವಿತಾ ಸಮಾಜದ ಕೆOಗಣ್ಣ ಗೆ  ಗುರಿಯಾಗಿದ್ದಾರೆ. ಇದೂ ಸಾಲದೆOಬOತೆ ಬಿ ಜೆ ಪಿ ಮಾಜಿ ಸಚಿವ ಸೊಗಡೂರು ಶಿವಣ್ಣ ಇದು ಬಿ ಜೆ ಪಿ ಯಾತ್ರೆ ಅಲ್ಲ ಇದು ಕೆ ಜೆ ಪಿ ಯಾತ್ರೆ ಎ Oದೂ , ಈ ಯಾತ್ರೆಗೆ ರೂಪಾಯಿ 500, 1000 ಕೊಟ್ಟು ಜನರನ್ನು ಕರೆ ತರುತ್ತಿದ್ದಾರೆ ಎOದು ಪತ್ರಿಕಾ ಗೋಸ್ಟಿ ಯಲ್ಲಿ ಹೇಳುವ ಮೂಲಕ ಬಿ ಜೆ ಪಿ ಮುಜುಗರ ಪಡುವOತೆ ಮಾಡಿದ್ದು ಅಲ್ಲದೆ  ಶ್ರೀ ಯಡಿಯೂರಪ್ಪ ನವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿ ಜೆ  ಪಿ ಗೇ ಖಳನಾಯಕನಾದುದನ್ನು ಕೆದಕಿ   ನೆನಪಿಸುವOತಾಗಿದೆ. ಇಸ್ಟೂ ಸಾಲದಕ್ಕೆ ಶ್ರೀ ಯಡಿಯೂರಪ್ಪನವರ ಉತ್ತರ ಕರ್ನಾಟಕದ ವೋಟ್ ಬ್ಯಾOಕ್ ಆದ ಲಿಂಗಾಯಿತ ವೀರಶೈವ ಜನತೆ ಈಗ ತುOಬಾ ಸಂಕೀರ್ಣ ಸ್ಥಿತಿಯಲ್ಲಿದೆ. ಮೊನ್ನೆ  ಕೂಡಲ ಸಂಗಮ ಪಂಚಮ ಸಾಲಿ ಪೀಠದ ಬಸವ ಜಯ ಮ್ರತ್ಯುಂಜಯ ಸ್ವಾಮೀಜಿ   ಲಿಂಗಾಯಿತರು ಒಂದೇ ತಂದೆಗೆ ಹುಟ್ಟಿದ್ದು ,ಆದರೆ ವೀರಶೈವರು ಐವರು ತಂದೆಗೆ ಹುಟ್ಟಿದ್ದು ಎಂದು ಹಾದರ ಭಾಷೆಯ ತರ  ಹೇಳುವ ಮೂಲಕ ಸರ್ವ ಹಿOದು ಜನತೆಗೆ ಆಘಾತವಾಗಿದೆ. ಖಂಡಿತವಾಗಿಯೂ ಈ ಸ್ವಾಮಿಯನ್ನೂ ಇಡೀ ಹಿOದೂ ಸಮಾಜ ಖಂಡಿಸಿ ಬಹಿಸ್ಕರಿಸಬೇಕಿದೆ. ಆದರೆ ಹಿOದೂ ಸಂಘಟನೆಗಳಾದ ವಿಶ್ವ ಹಿOದು ಪರಿಶತ್, ಆರ್ ಎಸ್ ಎಸ್ ,ಶ್ರೀರಾಮ ಸೇನೆ ,ಭಜರಂಗ ದಳ ಹಾಗು ಬಿ ಜೆ ಪಿ  ಈ ಸ್ವಾಮೀಜಿಯ ಹೊಲಸು ಮಾತನ್ನು ಖಂಡಿಸಿ ಪ್ರತಿಭಟಿಸದಿರುವುದು ಸೋಜಿಗವೆನಿಸುತ್ತಿದೆ. ನಿಮಗೆ ವೀರಶೈವರು ಬೇಡದಿದ್ದರೆ ಬೇಡ,ಹಿOದೂ ಧರ್ಮವೂ ಬೇಡದಿದ್ದರೆ ಬೇಡ ,ಸರಕಾರ ಯಾ ಸOವಿಧಾನ ಮಾನ್ಯ ಮಾಡಲಿ  ಬಿಡಲಿ ನಿಮಗೆ ಬೇಕಾದ ಧರ್ಮದ ಹಾದಿಯಲ್ಲಿ ನಡೆಯಿರಿ, ಬೇಡವೆOದವರು ಯಾರು? ನೀವು ಸ್ವಂತಂತ್ರರು ಆದರೆ ಬೇರೆಯವರನ್ನು ಹಾದರಕ್ಕೆ ಹುಟ್ಟಿದವರು ( ಐವರಿಗೆ ಹುಟ್ಟಿದವರು) ಹೇಳುವ ಹಕ್ಕು ನಿಮಗಿಲ್ಲ.  ಅಂದು ಶ್ರೀ ಬಸವಣ್ಣನವರು ಎಲ್ಲರನ್ನು ಉದ್ದೇಶಿಸಿ  ಅಂದಿದ್ದರು  " ಅವನಾರಯ್ಯ ಅವನಾರಯ್ಯ ಅವ ನಮ್ಮವನಯ್ಯ" ಸಕಲ ಮನುಜ ಕುಲದವರು ನಮ್ಮವರು ಎಂದು ಸಾರಿದ್ದರು.  ಆದರೆ ಇಂದು ಅದೇ ಲಿಂಗಾಯಿತರ ಸ್ವಾಮೀಜಿ ಇಸ್ಟೋOದು ವರ್ಷಗಳ ಕಾಲ ಜೊತೆಗಿದ್ದ  ವೀರಶೈವರನ್ನು  ಅತ್ಯಂತ ಹೊಲಸು ಮಾತುಗಳಿOದ ತೇಜೋವಧೆ ಮಾಡುವುದನ್ನು ನೋಡುವಾಗ ಆ ಸ್ವಾಮಿ ಪೀಠಕ್ಕೆ ಅವಮಾನವಾಗಿದೆ. ಇದು ಚುನಾವಣೆ ಇನ್ನೂ ಹತ್ತಿರವಾಗುತ್ತಿದOತೆ ಯಾವ ಮಟ್ಟಕ್ಕೆ ಹೋಗುತ್ತದೆ ಎOದು ಹೇಳಲಾಗದು.ಇದು ಬಿ ಜೆ ಪಿ ಗೆ ಮಾತ್ರವಲ್ಲ ಶ್ರೀ ಯಡಿಯೂರಪ್ಪನವರ ನಿದ್ದೆ ಕೆಡಿಸಿದೆ ಅಂದರೆ ತಪ್ಪಲ್ಲ. ಬಿ ಜೆ ಪಿ ಯು  ಐಟಿ ಯನ್ನು ತನ್ನ ದಾಳವಾಗಿ ಉಪಯೋಗಿಸಿಕೊOಡರೆ ಕರ್ನಾಟಕದ ಕಾಂಗ್ರೇಸ್ ಎಸ್ ಐ ಟಿ  ಯನ್ನು ತನ್ನ ದಾಳವನ್ನಾಗಿ ಉಪಯೋಗಿಸಲು ಚಿಂತನೇ ನಡೆಸಿದೆ. ಬೆಲೆಕೇರಿ ಮಂಗಳೂರು ಅಕ್ರಮ ಆದಿರು ರಫ್ತು ಪ್ರಕರಣದ  ಎಲ್ಲ  ಆರೋಪಿಗಳ ಆಟ ಬಟ್ಟಮ್ ಬಯಲಾದರೆ , ಬಿಜೆಪಿ ಅಧಿಕಾರದಲ್ಲಿದ್ದಾಗ ಇಂಧನ ಖರೀದಿಯ ಆಕ್ರಮಗಳು ಸಾಭೀತಾದರೆ ಬಿ ಜೆ  ಪಿ ಅಧಿಕಾರ ಹಿಡಿಯುವುದು ಕಗ್ಗಂಟಾಗಬಹುದು. ಇತ್ತ ಶ್ರೀ ಯಡಿಯೂರಪ್ಪನವರು ಶ್ರೀ ಸೀದ್ದರಾಮಯ್ಯನ ಅಧಿಕಾರವದಿಯಲ್ಲಿ ನಡೆದ ಭೂ ಹಗರಣಗಳನ್ನು ಸುದ್ದಿಗೋಸ್ಟಿಯಲ್ಲಿ ಬಯಲು ಪಡಿಸಿದ್ದರು. ಇದು ಬರೀ ಆಪಾದನೆಯೇ ಯಾ ನಿಜಾಂಶವಿದೇಯೇ ಎOಬುದು ಜನತೆಗೆ ತಿಳಿಯಬೇಕಿದೆ. ಸುಪ್ರೀಮ್ ಕೋರ್ಟ್ ಮದ್ಯೆ ಪ್ರವೇಶಿಸಿ ಈ ಎರಡೂ ಕಡೇಯವರು ಮಾಡಿರುವ ಆಪಾದನೆಗಳ ಬಗ್ಗೆ ನಿಷ್ಪಕ್ಷ ತನಿಖೆಗೆ ಆದೇಶಿಸಬೇಕು. ಸತ್ಯಾಂಶ ಹೊರ ಬಂದು ಬ್ರಸ್ಟ ರಾಜಕಾರಣಿಗಳು  ಚುನಾವಣೆಯ ಮೊದಲೇ ಜೈಲು ಸೇರಬೇಕು. ಸ್ವಚ್ಛ ಭಾರತದ ಅಭಿಯಾನದOತೆ  ಸ್ವಚ್ಛ ರಾಜಕಾರಣ ಅಭಿಯಾನವೂ ಆರOಭವಾಗಲಿ. ಸ್ವಚ್ಛ ಆಡಳಿತ ಜನತೆಗೆ ಸಿಗುವOತೆ ಆಗಲಿ.  ಒಂದು ಕಾಲದಲ್ಲಿ ಬಿ ಜೆ ಪಿ ಉಚ್ರಾಯ ಸ್ಥಿತಿಗೆ ಬರಲು ಶ್ರೀ ಯಡೆಯೂರಪ್ಪನವರೆ ಕಾರಣೀಕರ್ತರಾಗಿದ್ದರು.ಆದರೆ  ಇಂದು ಬಿ ಜೆ ಪಿ ನೆಲಕಚ್ಚಲು ಇವರೆ ಕಾರಣವಾಗಬಹುದು. ಒಂದೊಮ್ಮೆ ಬಿ ಜೆ ಪಿ ಶ್ರೀ ಯಡಿಯೂರಪ್ಪನವರ  ನೇತ್ರತ್ವದಲ್ಲಿ  ಬಹುಮತ ಗಳಿಸಲು ವಿಫಲವಾದಲ್ಲಿ ಶ್ರೀ ಯಡಿಯೂರಪ್ಪನವರಿಗೆ ಅವರ ರಾಜಕೀಯ ಭವಿಶ್ಯವೇ ಮುಗಿದOತೆ. ಕಳೆದ ಭಾರೀ ಮುಖ್ಯಮಂತ್ರಿ ಗಾದಿ ಸಿಕ್ಕಿದಾಗ   ಅದನ್ನು ಚೆನ್ನಾಗಿ ಐದು ವರ್ಷಗಳ ಕಾಲ ನಿಭಾಯಿಸಿದ್ದರೆ ಇಂದು ಪರಿಸ್ಥಿತಿಯೇ ಬೇರೆ ಇರುತಿತ್ತು. ಆದರೆ ಸಮಯ ಮೀರಿ ಹೋಗಿದೆ. ಇಂದು ಕರ್ನಾಟಕದಲ್ಲಿ ಬಿ ಜೆ ಪಿ ಯನ್ನು ಉಳಿಸಬೇಕಾದರೆ, ಬಹುಮತ ಗಳಿಸಬೇಕಿದ್ದಲ್ಲಿ ಸ್ವತಃ ಶ್ರೀ ಯಡಿಯೂರಪ್ಪನವರೆ ಖುದ್ದಾಗಿ  ಮುOದಿನ ಮುಖ್ಯಮಂತ್ರಿ ಶ್ರೀ ಅನಂತ್ ಕುಮಾರ್ ಹೆಗಡೆ ಯಾ ಶ್ರೀ ಸುರೇಶ್ ಕುಮಾರ್ ಎOದು ಘೋಷಿಸಿದರೆ  ನಿಜವಾಗಿಯೂ ಕರ್ನಾಟಕದಲ್ಲಿ ಒಂದು ಬದಲಾವಣೆ ಬರಬಹುದು

ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್

9594228684

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...